ಪೊಂಗೊಳಲಾನು ಕರದಲ್ಲಿ ಪಿಡಿದು sripadarajaru
Restart mobile & try if the above audio is not playing
ಶ್ರೀ ಶ್ರೀಪಾದರಾಜರ ಕಣ್ಣಲ್ಲಿ ಶ್ರೀ ಗೋಪಿನಾಥನ ಮಹಿಮಾ ವರ್ಣನ "
ರಾಗ : ಮಧ್ಯಮಾವತಿ ಅದಿತಾಳ
ಪೊಂಗೊಳಲಾನು ಕರದಲ್ಲಿ ಪಿಡಿದು ।
ಹ್ಯೆಂಗಳಾ ಮಧ್ಯದಲ್ಲಿ ನಿಂದಾನು ಕೃಷ್ಣ
।।ಪಲ್ಲವಿ।।
ನೀಲ ಮೇಘ ರತುನದ ಕಾಂತಿಯು ಹರಿಯು ।
ಬಾಲ ಸೂರ್ಯನಂದದಿ ವಸನವನುಟ್ಟು ।
ಲೋಲಚಾರುಮಣಿ ಮಕರಕುಂಡಲನಿಟ್ಟು ।
ಬಾಲ ಲೀಲೆಯಿಂದ ಬನದೊಳಗಾಡುವ ।।1।।
ಮತ್ತಭೃಂಗ ಕೂಜಿತ ವನಮಾಲೆ
ಭಾಸ್ತಿ ಶಂಖ ಚಕ್ರ ಗದೆ ಕೌಮೋದಕಿಯು ।
ಉತ್ತಮಾಂಗ ನಸಲೊಳು ತಿಲಕವಿಟ್ಟು ।
ಮತ್ತಾದ ವಜ್ರದ ಅಂಗಾನೆರೊಡನೆ ।।2।।
ಮಂಗಳಮುನಿ ಹೃದಯ ಮಂದಿರ । ಮನ ।
ದಂಗಳದೊಳಗಾಡುವ ಹರಿ ನಮ್ಮಾ ।
ಕಂಗಳ ಪಥದಲ್ಲಿ ಸುಳಿದನುಭವ
ಅನಂಗಳಾದಿ ವ್ರಜರಂಗನೆರೊಡನೆ ।।3।।
ಅಂದು ಗೋವು ಗೋಪರು ಗೋಪಿಯರೊಡನೆ ।
ಬಂದು ನಿಂದು ವೃಂದಾವನದ್ಯಡೆಯಲ್ಲಿ ।
ನಂದಾನಂದನರೊಳಗಾಡಿದ ಪರಿ ।
ಯಿಂದ್ಯನ್ನ ಮನದಾಂಗಣದೊಳಗೆ
।।4।।
ಅಂಗ ರಂಗ ವಿಲಸಿತ । ಕರುಣಾಂಗಾ ।
ನಂಗಕೋಟಿ ಗಂಗಾ ಜನಕಾನು ಹರಿ ।
ಅಂಗನೆಯರ ಮನದಾಂಗಣದೊಳಗೆ
ಹಿಂಗಾದೆ ನಿಂದಾನು ರಂಗವಿಠ್ಠಲನೂ ।।5।।
***
Comments
Post a Comment