ಮರುಕವಾಗದೆ ನಿನಗೇ ರಘುರಾಮಚಂದ್ರ raghurama vittalaru


Restart mobile & try if the above audio is not playing

raga darbari kanada  aadi tala

ಶ್ರೀ ಕೂಡ್ಲಿ ಮಠದ ಪೀಠಾಧಿಪತಿ ಆಗಿದ್ದ ಶ್ರೀ ರಘುಪ್ರೇಮತೀರ್ಥರ ಪೂರ್ವಾಶ್ರಮದ ಪುತ್ರರು 

ಮುತ್ತಗಿ ಸ್ವಾಮಿರಾಜಾಚಾರ್ಯ (ರಘುರಾಮ ವಿಠಲ ದಾಸರು) 

Total Krutis - 15  Vrundavana- Adoni 

1972 vaishakha bahula panchame

** 

ಮರುಕವಾಗದೆ ನಿನಗೇ ರಘುರಾಮಚಂದ್ರ
ಕರೆದರೆ ಧ್ವನಿ ಕೇಳದೆ |
ರಘುರಾಮಚಂದ್ರ
ಮಾರುತನಂತೆ ನಿನ್ನ ಸೇವಿಸಲರಿಯೆನು
ಭರತನಂತೆ ನಿನ್ನ ಪೂಜಿಸಲರಿಯೆನು ||ಪ ||

ಮಖರಿ ಬಾಧೆಗೆ ಸಿಲುಕಿದ ಕರೀರಾಜ ತನ್ನ
ಪೊರೆಯೇ ಶ್ರೀ ಹರಿಯೆನಲು
ಕರಿಯ ಮೊರೆಯ ಕೇಳಿ ತ್ವರಿತದಿಂದ ಬಂದು |
ಕರೀರಾಜನನ್ನೇ ಉದ್ದರಿಸಲಿಲ್ಲವೋ ರಂಗ||

ದುರುಳ ರಕ್ಕಸನು ತನ್ನ ಶಿಶುವನ್ನೇ ಪಿಡಿದು
ತೋರೋ ಶ್ರೀ ಹರಿ ಎನಲು
ತರಳ ಪ್ರಹ್ಲಾದ ನ  ಕರುಳ ವಚನ ಕೇಳಿ
ತ್ವರಿತದಿಂದಲಿ ಸ್ಥಭ ಒಡೆಯಲಿಲ್ಲವೋ ದೇವಾ ||

ವಾಮನ ಮೂರುತೀಯು ಬಲಿರಾಜನ ಯಾಗ ಮಂಟಪಕೆ ಪೋಗಿ
ಮೂರು ಪಾದದಷ್ಟು ಭೂಮಿ ದನವ ಕೇಳಿ
ಬಲಿಯ ಮೆಟ್ಟಿದ ಶ್ರೀ ರಘುರಾಮ ವಿಠಲ ನಂತೇ ||
***

Comments