ಅನುಗಾಲವು ಚಿಂತೆ ಮನುಜಗೆ purandara dasaru
Restart mobile & try if the above audio is not playing
ಶ್ರೀಪುರಂದರದಾಸರ ಕೃತಿ
ರಾಗ : ಕೀರವಾಣಿ ಖಂಡಛಾಪುತಾಳ
ಅನುಗಾಲವು ಚಿಂತೆ ಮನುಜಗೆ |
ಮನಹೋಗಿ ಮಾಧವನ ಒಡಗೂಡುವನಕ ॥ಪ.॥
ಹೆಂಡಿರಿದ್ದರು ಚಿಂತೆ ಹೆಂಡಿರಿಲ್ಲದ ಚಿಂತೆ |
ಕೊಂಡು ಕುರೂಪಿಯಾದರು ಚಿಂತೆಯು ||
ತೊಂಡನಾಗಿ ತಿರುಗಿ ತುತ್ತ ತರುವ ಚಿಂತೆ |
ಮಂಡೆ ಬೀಳುವ ತನಕ ಚಿಂತೆ ಕಾಣಣ್ಣಾ 1
ಬಡವನಾದರು ಚಿಂತೆ ಬಲ್ಲಿದನಾದರು ಚಿಂತೆ |
ಕೊಡಧನ ಕೈಯೊಳಿದ್ದರು ಚಿಂತೆಯು |
ಬಡವನಾಗಿ ತಿರುಗಿ ತುತ್ತ ತರುವ ಚಿಂತೆ |
ಪೊಡವಿಯೊಳಿಲ್ಲದ ಚಿಂತೆ ಕಾಣಣ್ಣಾ 2
ಮನೆಯಿದ್ದರೂ ಚಿಂತೆ ಮನೆಯಿಲ್ಲದ ಚಿಂತೆ |
ಮನೆ ಭಾರವತಿಯಾದರೂ ಚಿಂತೆಯು |
ಮನಸಿಜನಯ್ಯ ಶ್ರೀ ಪುರಂದರವಿಠಲನ |
ನೆನೆದರೆ ಚಿಂತೆಯೆ ಇಲ್ಲ ಕಾಣಣ್ಣಾ 3
***
Comments
Post a Comment