ಇಂದು ಆರುತಿ ತಂದು ಬೆಳಗಿರೆ karparanarahari dasaru
Restart mobile & try if the above audio is not playing
ಶ್ರೀ ಕಾರ್ಪರ ನರಹರಿದಾಸರ ಕೃತಿ ಲಕ್ಷ್ಮೀದೇವಿಯ ಆರತಿ ಹಾಡು
ರಾಗ : ಆರಭಿ ಮಿಶ್ರಛಾಪು
ಇಂದು ಆರುತಿ ತಂದು ಬೆಳಗಿರೆ
ಸಿಂಧುರಾಜನ ಕುವರಿಗೆ
ಸಿಂಧು ರಾಜನ ಕುವರಿಗೆ
ಅರವಿಂದ ನಾಭನ ಮಡದಿಗೆ || ಪ ||
ಅಂದು ಸುರಕೃತ ಸಿಂಧು ಮಥನದಿ ಬಂದು
ನೋಡುತ ಕೃಷ್ಣಗೆ
ವಂದಿಸುತ ಪೂಮಾಲೆ ಹಾಕಿದ
ನಂದಗೋಪಕುಮಾರಗೆ || 1 ||
ಎಲ್ಲದೇಶ ದೊಳೆಲ್ಲ ಕಾಲದೊಳೆಲ್ಲ
ಸುರರೊಳು ಕೃಷ್ಣಗೆ
ಇಲ್ಲ ಸಮರೆಂತೆಂಬುದನು ಜಗಕೆಲ್ಲ
ತೋರಿದ ದೇವಿಗೆ || 2 ||
ವಾರವಾರದಿ ಚಾರುಪದಯುಗ
ಸಾರಿಭಜಿಸುವ ಜನರಿಗೆ
ಆ-ಪಾರ ಸೌಖ್ಯಗಳೀವ
ಕಾರ್ಪರ ನಾರಸಿಂಹನ ರಾಣಿಗೆ || 3 |
***

Comments
Post a Comment