ವೇದವ್ಯಾಸರ ದಿವ್ಯಪಾದ ಪದುಮಯುಗಲ karparaharahari dasaru



  Restart mobile & try if the above audio is not playing

ಶ್ರೀ ಕಾರ್ಪರ ನರಹರಿದಾಸ ಕೃತಿ   ಶ್ರೀ ವೇದವ್ಯಾಸ ದೇವರನ್ನು ಕುರಿತು 

ರಾಗ: ಮೋಹನ     ಮಿಶ್ರಛಾಪು   (ಸಂಪ್ರದಾಯ ಧಾಟಿ )


ವೇದವ್ಯಾಸರ ದಿವ್ಯಪಾದ ಪದುಮಯುಗಲ

ಆರಾಧಿಸುತಿರು ಮನುಜಾ ||ಪ||


ವೇದಗಳಿಗೆ ಸಮ್ಮತವಾದ ಪುರಾಣಗಳ

ಸಾದರದಲಿ ರಚಿಸಿ ಮೋದವ ಬೀರಿದ ||ಅ.ಪ||


ಧರಿಯೊಳು ಸುಜನರಿಗೆ ವರಧರ್ಮ ತಿಳಿಸೆಂದು

ಸುರಮುನಿ ಪ್ರಾರ್ಥನದಿ

ಪರಮ ಮಂಗಲ ವೀರವರ ಭಾಗವತ ಗ್ರಂಥ

ವಿರಚಿಸಿ ಶುಕಮುನಿಗೆ ಕರುಣದಿಂದರುಹಿದ ||೧||


ವಾಸಿಪ ಮುನಿಗುಣ ಭೂಷಿತ ಬದರಿಯೋಳ್

ತೋಷ ತೀರ್ಥರ ಕರೆದು

ಭೂಸುರ ಜನರಿಗೆ ಮೋಕ್ಷದಾಯಕ ಸೂತ್ರ

ಭಾಷ್ಯವ ರಚಿಸೆಂದಾದೇಶವ ನೀಡಿದ ||೨||


ಅರಿದರಾದ್ಯಯುಧ ಧರಿಸಿ ಷೋಡಶ ಸಂಖ್ಯ

ಕರಗಳಿಂದಲಿ ಶೋಭಿತ

ಶರಣು ಜನಕೆ ಸುರತರು ವೆನಿಸಿ ಧರೆಯೊಳು

ಮೆರೆವ ಕಾರ್ಪರ ನರಹರಿ ರೂಪಾತ್ಮಕನಾದ ||೩||

***


Comments