ಕೃಷ್ಣಮೂರುತಿ ಎನ್ನ ರಕ್ಷಿಸೈ ಕಾರುಣ್ಯನಿಧೆ vidya ratnakara teertharu krishnamuruti enna rakshisai
Restart mobile & try if the above audio is not playing
ಶ್ರೀ ಶ್ರೀವಿದ್ಯಾರತ್ನಾಕರತೀರ್ಥರ ಕೃತಿ
ರಾಗ : ಷಣ್ಮುಖಪ್ರಿಯ ಆದಿತಾಳ
ಕೃಷ್ಣಮೂರುತಿ ಎನ್ನ ರಕ್ಷಿಸೈ ಕಾರುಣ್ಯನಿಧೆ ಸಿರಿ
ಕೃಷ್ಣಮೂರುತಿ ॥ಪ॥
ನಾಗೇಂದ್ರಶಯನನೆ ನಾಗೇಂದ್ರ ಮರ್ದನನೆ
ನಾಗೇಂದ್ರಗೊಲಿದವನ್ಹಾಗೆ ನಾನಲ್ಲವೇನೊ 1
ತಾಪಸಸತಿ ಶಿಲಾರೂಪವ ಪೊಂದಿರಲು
ಶಾಪ ಬಿಡಿಸಿ ಅವಳ ಕಾಪಾಡಲಿಲ್ಲವೇನೊ 2
ಆ ನೀಚನಿಂದ ಯಜ್ಞಸೇನೆಗೆ ಬಂದ ಮಾನ
ಹಾನಿ ತಪ್ಪಿಸಿ ಅಭಿಮಾನಿಸಿ ರಕ್ಷಿಸಿದ 3
ಇಂದಿರೆಯರಸನೆ ವಂದಿಸಿ ಬೇಡುವೆನೊ
ಎಂದಿಗು ಎನ್ನ ಹೃದಯಮಂದಿರ ಬಿಡದಿರೊ 4
ವರನಾಮಗಿರಿ ಸಿರಿನರಹರಿಮೂರ್ತಿಯ
ಚರಣಸೇವಕನೆಂದು ಕರುಣ ಎನ್ನೊಳಗಿಟ್ಟು 5
**

Comments
Post a Comment