ದುರಿತಗಜ ಪಂಚಾನನ ನರಹರಿಯೆ sripadarajaru duritagaja panchanana
Restart mobile & try if the above audio is not playing
ಶ್ರೀ ಶ್ರೀಪಾದರಾಜರ ಕೃತ
ರಾಗ : ಶುಭಪಂತುವರಾಳಿ
ದುರಿತಗಜ ಪಂಚಾನನ-
ನರಹರಿಯೆ ದೇವರ ದೇವ ಕಾಯೊ ಗೋವಿಂದ ||pa||
ಹೆಸರುಳ್ಳ ನದಿಗಳು ಒಳಗೊಂಬೊ ಸಮುದ್ರನು
ಬಿಸುಡುವನೆ ಕಾಲುಹೊಳೆಗಳ ಗೋವಿಂದ lla.pll
ಹೆತ್ತ ಮಕ್ಕಳು ಹುಚ್ಚರಾದರೆ ತಾಯ್ತಂದೆ
ಎತ್ತದೆ ನೆಲಕೆ ಬಿಸುಡುವರೆ ಗೋವಿಂದ
ಒಂದು ಮೊಲಕೆ ಆರು ಹುಲಿ ಬಂದುಕವಿದಿದೆ
ಬಂಧನವ ಬಿಡೆಸೆನ್ನ ತಂದೆ ಗೋವಿಂದ ll1ll
ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆ
ನಿನ್ನನು ಓಲೈಸಲ್ಯಾಕೆ ಗೋವಿಂದ
ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆ
ಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ ll2l
ಅರಸು ಮುಟ್ಟಲು ದಾಸಿ ರಂಭೆಯಾದಳು ದೇವ
ಪರಶು ಮುಟ್ಟಲು ಲೋಹ ಸ್ವರ್ಣ ಗೋವಿಂದ
ಮಾನಾಭಿಮಾನದೊಡೆಯ ಶ್ರೀರಂಗವಿಠಲ
ಜ್ಞಾನಿಗಳ ಅರಸನೆ ಕಾಯೋ ಗೋವಿಂದ॥3ll
***
.jpeg)
Comments
Post a Comment