ಸಂಸಾರವನು ಮಾಡಿ ಸಕಲ ಜನರೂ kalluru subbanna dasaru samsaravanu madi sakala janaru


Restart mobile & try if the above audio is not playing


ಶ್ರೀ ಕಲ್ಲೂರು ಸುಬ್ಬಣ್ಣ ದಾಸರ ಕೃತಿ 

ರಾಗ : ರೇವತಿ    ಖಂಡಛಾಪು 


ಸಂಸಾರವನು ಮಾಡಿ ಸಕಲ ಜನರೂ llಪll


ಕಂಸಾರಿ ಶ್ರೀಕೃಷ್ಣ ಕೈಪಿಡಿದು ಸಲಹುವನು

 llಅ.ಪ.ll


ಬುದ್ಧಿಯೆಂದೆಂಬ ಕನ್ನಿಕೆಯ ಮದುವೆಯ ಮಾಡಿ

ಸದ್ಧರ್ಮದಭಿಮಾನದಿಂದ ಬೆಳಸೀ

ಶುದ್ಧ ಭಕ್ತಿಗಳೆಂಬ ಮಕ್ಕಳನು ಪಡೆದು ಬಹು

ಅದ್ಭುತ ಭವಾಬ್ಧಿಯನು ದಾಟಿರಯ್ಯಾ ll1ll


ಚಾರು ಸುಜ್ಞಾನವೆಂಬುವ ಮುದ್ದು ಮಗನ್ಹಡೆದು

ವೈರಾಗ್ಯವೆಂಬ ಭಾಗ್ಯವನೆ ಬೇಡೀ

ಸಾರ ಹರಿನಾಮಗಳ ರಸ ಪದಾರ್ಥಗಳುಣಿಸಿ

ಕಾರುಣ್ಯದಲಿ ಬೆಳೆಸಿರಯ್ಯ ಮಕ್ಕಳನು ll2ll


ಯಮ ನಿಯಮ ಅಷ್ಟಾಂಗ ಅಣಿಮಾದಿಗಳು

ಕ್ಷಮದಮಾದಿಗಳೆಂಬ ಬಂಧು ಬಳಗಾ

ಮಮತೆ ಪೆರ್ಚಿಸಿಕೊಂಡು ಬೀಗತನ ಮೊದಲಾದ

ಅಮರಿಕೆಯ ಸಂಬಂಧವನೆ ಮಾಡಿರಯ್ಯಾll3ll


ಶೀಲ ಸನಕಾದಿಗಳು ಮುನಿ ದೇವತಾದಿಗಳು

ತಾಳಿ ತಮ್ಮೊಳಗೆ ಸಮ ವಿಷಯರಾಗಿ |ಆಲಂಪಟಗಳ್ಹಚ್ಚಿಕೊಂಡು ಭವನಿಧಿ ದಾಟಿ

ಸಾಲೋಕ್ಯ ಮೊದಲಾದ ಮುಕ್ತಿಗೈದಿದರೂ ll4ll


ಹೊರಗಿದ್ದ ಪದವಿ ಸತಿ ಸುತರು ಭಾಗ್ಯವೆ ನಿಮಗೆ

ಹರಿಯಿತ್ತ ಕಾಲಕ್ಕು ಹೃದಯದೊಳಗೇ|ಮರೆಯಲಾಗದು ಹಿಂದೆ ಸಂಸಾರದಾ ಬಾಧೆ ದುರಿತಾರಿ ವ್ಯಾಸ ವಿಠ್ಠಲ ಬ್ಯಾಗ ಒಲಿವಾ ll5ll

**

Comments