ಸಿಲುಕಿದೆನು ಭವ ಪಾಶದಲಿ ನಾನು ಹರಿಯೆ vyasatatwajna teertharu silukidenu bhava pashadali

Restart mobile & try if the above audio is not playing

ಶ್ರೀ ಶ್ರೀವ್ಯಾಸತತ್ವಜ್ಞತೀರ್ಥರ ಕೃತಿ 

purvashrama name: I G Swami Venkataramacharya 

1704-1800  ankita-vasudeva vittala


ರಾಗ : ಶುಭಪಂತುವರಾಳಿ   ಖಂಡಛಾಪುತಾಳ


ಸಿಲುಕಿದೆನು ಭವ ಪಾಶದಲಿ ನಾನು ಹರಿಯೆ

ಕಿಲಿಕಿಲಿ ನಗುವರೆ ಸಲಹುವದು ದೊರೆಯೆ llಪll


ಕೆಲರ ಮಾತಿಗೆ ಪೋಗಿ ಬಲವಾಗಿ ಅವರ

ಕೆಲಸ ಮಾಡುವೆ ನಿಜ ಕೆಲಸವ ಮರೆದೆ ನಾ ll1ll


ಧರಣಿಯ ಪತಿಸೇವೆ ಶರಣೆಂದು ತಿಳಿದು

ಮರೆದೆನೊ ನಿನ್ನ ಪಾದ ಸಿರಿಯ ರಮಣನೆ ll2ll


ಉದರಗೋಸುವಾಗಿ ಮರೆದವರ ವಶದಿ

ಹದನವ ಕಳಕೊಂಡು ಮದಡ ನಾನಾದೆನೊ ll3ll


ಉಣುವೆನೊ ಪರರನ್ನ ದಣಿವೆನೊ ಅದಕ್ಕೆ

ಕುಣಿವೆನೊ ಅವರಂತೆ ಗುಣವೇನು ಎನಗೆ ll4ll


ಈಸು ಪರಿಯಲೆನ್ನ ಶ್ರೀಶ ದಾಸರ ವಶದಿ

ವಾಸವಿತ್ತು ಬದುಕಿಸೊ ವಾಸುದೇವವಿಠಲ ll5ll

**

Comments