ಕಂಗಳಿಗೆ ಹಬ್ಬವಾಯಿತಯ್ಯ vyasarajaru kangalige habbavayitayya
Restart mobile & try if the above audio is not playing
ಶ್ರೀವ್ಯಾಸರಾಜರ ಕೃತಿ
ರಾಗ : ಆನಂದಭೈರವಿ ಏಕತಾಳ
ಕಂಗಳಿಗೆ ಹಬ್ಬವಾಯಿತಯ್ಯ
ಮಂಗಳಾತ್ಮಕ ಪುರಂದರದಾಸರನು ಕಂಡು llಪll
ಸಕಲ ತೀರ್ಥಕ್ಷೇತ್ರ ಯಾತ್ರೆ ಮಾಡಿದ ಫಲವು
ಸಕಲಸತ್ಕರ್ಮ ಸಾಧಿಸಿದ ಫಲವು
ಭಕುತಿಯಿಂ ಭಾಗೀರಥೀ ಮಜ್ಜನದಫಲವು
ರುಕುಮಿಣಿ ಪತಿಯ ಪದ ಭಕುತರನು ಕಂಡು ||1||
ಇವರ ನರರೆಂದವರು ನರಕದಲಿ ಬೀಳುವರು
ಕವಿಜನರು ಒಪ್ಪಿ ಕೈಹೊಡೆದು ಹೇಳಿರಲು
ಅವನಿಯೊಳಗತಿ ದುರ್ಲಭವು
ನಂದ- ಗೋಪನ್ನಕುವರನಿದ್ದೆಡೆಯೆ ವೈಕುಂಠವೆಂಬುವರ ಕಂಡು |2||
ಧನ್ಯನಾದೆನು ನಾನು ಮನುಜನ್ಮದಿ ಪುಟ್ಟಿ
ಮಾನ್ಯನಾದೆನು ಇನ್ನು ಈ ಜಗದೊಳಗೆ
ಪನ್ನಂಗಶಯನ ಶ್ರೀಕೃಷ್ಣನದಾಸರನು
ಚೆನ್ನಾಗಿ ಸ್ಮರಿಸಿ ಪಾವನ್ನನಾದೆನಿಂದು ||3||
**

Comments
Post a Comment