ಸ್ಮರಿಸಿ ಸುಖಿಸೆಲೊ ಮಾನವಾ tandevaradagopala dasaru smarisi sukhiselo manava
Restart mobile & try if the above audio is not playing
ಶ್ರೀ ತಂದೆ ವರದ ಗೋಪಾಲದಾಸರು "ಗೋಪಾಲದಾಸರನ್ನು" ಕುರಿತು ರಚಿಸಿರುವಂತಹ ಕೃತಿ
ರಾಗ : ಶಂಕರಾಭರಣ ಆದಿತಾಳ
ಸ್ಮರಿಸಿ ಸುಖಿಸೆಲೊ ಮಾನವಾ ॥ಪ॥
ಸ್ವಾನುಭಾವದಿಂದ ಸುಖವಬಡಿಪ
ಗೋಪಾಲದಾಸರಾಜರಡಿಗಳನುದಿನಾ ॥ಅ.ಪ॥
ಅಪಾರ ಜನುಮದ ದಾಸ್ಯಹರಿಸಿ
ಸುಖಸಾರಸುರಿಪರು ಅನುದಿನಾ ॥೧॥
ಸತ್ಯವಾದ ವಚನ ಸತ್ವಜೀವರಿಷ್ಟ-
ಗರೆವ ಚಿತ್ತದೊಳಗೆ ಅನುದಿನಾ ॥೨॥
ಸರ್ವ ವಿಧದಿ ತೋಷಬಡಿಪ
ತಂದೆವರದಗೋಪಾಲವಿಠಲನೇ ಸಾಕ್ಷಿಯಾಗಿಪ್ಪನನುದಿನಾ॥೩॥
**
.jpeg)
Comments
Post a Comment