ನೀ ಎನ್ನ ಕಾಯಬೇಕಯ್ಯ ಆಂಜನೇಯ sripadarajaru nee enna kayabekayya anjaneya

 

Restart mobile & try if the above audio is not playing

ಶ್ರೀಶ್ರೀಪಾದರಾಜರ ಕೃತಿ

ರಾಗ : ಮಧ್ಯಮಾವತಿ    ಏಕತಾಳ 


ನೀ ಎನ್ನ ಕಾಯಬೇಕಯ್ಯ ಆಂಜನೇಯ

ನಾನು ನಿನ್ನ ಭಜಿಸಬೇಕಯ್ಯ॥ಪ॥


ನೀನು ಎನ್ನ ಕಾಯಬೇಕು 

ನಾನು ನಿನ್ನ ಭಜಿಸಬೇಕು 

ನೀನು ನಾನು ಒಂದು ಗೂಡಿ

ರಾಮ ಭಜನೆಯ ಮಾಡಬೇಕು॥ಅ.ಪ॥


ಆ ಜನ್ಮ ಬ್ರಹ್ಮಚಾರಿ

ಅಪ್ರತಿಮ ಬಲಶಾಲಿ ನೀನು

ರಾಮಭಕ್ತಿಯ ಭಂಡಾರವ

ಲೋಕಕೆಲ್ಲವ ತೋರಿದಾತ॥೧॥


ಭಕ್ತರ ಸಂಸಾರ ಜಲಧಿಯು

ರಾಮನಾಮದ ನೌಕೆಯಲ್ಲಿ

ದಾಟಿ ಹೊರಟಿಹ ನಾನು ಪಯಣಿಗ 

ನೀನೆ ಅಂಬಿಗ ದಾಟಿಸಯ್ಯ॥೨॥


ಮಾತೆಗೆ ಮುದ್ರಿಕೆಯಿತ್ತವನೀತ

ಲಂಕಾಪುರವನುದ್ಧರಿಸಿದನೀತ

 ರಂಗವಿಠಲನ ಪ್ರೀತನೀತ

ವೀರಪ್ರತಾಪಿ ಆಂಜನೇಯ॥೩॥

** 

Comments