ಕಾವೇರಿ ಕಲುಷಹಾರಿ ಪಾವನ ಶರೀರೆ jagannatha dasaru kaveri kalushahari pavana shareere

Restart mobile & try if the above audio is not playing

ಶ್ರೀಜಗನ್ನಾಥದಾಸರ ಕೃತಿ   ಕಾವೇರಿ ನದಿಯ ಸ್ತೋತ್ರ ಪದ

ರಾಗ : ನಾಟ     ಆದಿತಾಳ


ಕಾವೇರಿ ಕಲುಷಹಾರಿ

ಪಾವನ ಶರೀರೆ ಶುಭತೋಷಕಾರಿ ||pa||


ಶ್ರೀ ವಾಸುದೇವ ರಂಗೇಶನಾಲಯಕೆ ನೀ

ಆವರಣಳಾಗಿಪ್ಪೆ ವಿರಜೆಯಂತೇ

ದೇವ ಋಷಿ ಗಂಧರ್ವ ಪಿತೃಪ ನರವರರಿಂದ

ಸೇವನೀಯಳಾಗಿ ಸರ್ವಾರ್ಥ ಪೂರೈಪೆ ||1||


ರವಿ ತುಲಾರಾಶಿಗೈದಿದ ಸಮಯದೊಳಗೊಂದು

ದಿವಸ ಮಜ್ಜನ ಗೈವ ಮಾನವರಿಗೆ

ಪವನಾಂತರಾತ್ಮಕನ ಪಾದಕಮಲವ ತೋರಿ

ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ ||2||


ಮೂಢಮತಿ ನಾನು ಕೊಂಡಾಡ ಬಲ್ಲೆನೆ ನಿನ್ನ

ಬೇಡಿಕೊಂಡೆನು ಹೃದಯ ನೀಡದೊಳಗೇ

ಗೂಡ ಪದ ಶಯನ ಜಗನ್ನಾಥ ವಿಠ್ಠಲನಂಘ್ರಿ

ನೋಡುವ ಸೌಭಾಗ್ಯ ದಯ ಮಾಡು ಪ್ರತಿದಿನದಲ್ಲಿ  ||3||


 ಚಿಟ್ಟೆಸ್ವರ

(ಮಧ್ಯಮಕಾಲ)


ಪಾನಿಪ ಮಪನೀಪಮಗಮಪನಿಪಾ

ಮಪಮಗಾಮರಿಸ ರಿಗಮಪದನಿಸ

ಸರಿಗಮರೀಸನಿ ಪನಿಸರಿಸಾನಿಪ

ಮರಿಸನಿಪ .... ರಿಸನಿಪಮ... ಸನಿಪಮರಿಸ ॥ಕಾವೇರಿ॥

**

Comments