ರಾಘವೇಂದ್ರ ಮುನಿರಾಯರ ಸ್ಮರಣೆ prasannavenkata dasaru raghavendra munirayara smarane
Restart mobile & try if the above audio is not playing
ಶ್ರೀ ಪ್ರಸನ್ನವೇಂಕಟ ದಾಸರು
ರಾಗ ಅಠಾಣ ಅದಿತಾಳ
ರಾಘವೇಂದ್ರ ಮುನಿರಾಯರ ಸ್ಮರಣೆ ।
ಜಾಗಿಲ್ಲದೆ ಮಾಡಿ ನೀಗೊ ಬವಣೆ ।। ಪಲ್ಲವಿ ।।
ಹಿಂದಿನ ಮೂರು ಜನ್ಮಗಳಲ್ಲೂ ।
ಇಂದಿರೇಶನನು ವಲಿಸಿ ಮೆರೆದು ಬಲು ।
ಕುಂದಿಲ್ಲದ ಪುಣ್ಯಗಳಿಸಿ ಸುರತರು ।
ಮಂದ ಭಾಗ್ಯರಿಗೆ ಹಂಚುತಲಿಹರು ।। ಚರಣ ।।
ಭೂತ ಪ್ರೇತ ಸಕಲಾದಿ ಶಕುನಭಯ ।
ಘಾತಚಕ್ರ ಜಾತಕದ ಪೀಡೆಗಳು ।
ಗತಿಸುವವೀ ಯತಿ ಕರುಣೆ ತೋರಲು ।
ನಿತ್ಯ ತುತಿಸೆ ನಿಜ ಮುಕುತಿ ನಿಶ್ಚಿತವು ।। ಚರಣ ।।
ಕಲಿಬಲ ಹೆಚ್ಚಿ ನಲುಗಿದ ಜನಕೆ ।
ಸುಲಭದ ಮುಕುತಿ ದಾರಿಲಿ ನಿಲ್ಲಿಸಿ ।
ನಲಿಲನಾಭ ಶ್ರೀ ಪ್ರಸನ್ವೇ೦ಕಟನಾಜ್ಞೆಲಿ ।
ಸುಲಲಿತ ಮಹಿಮೆ ತೋರಿ ನಲಿವ ಗುರು ।। ಚರಣ ।।
**

Comments
Post a Comment