ನಂಬು ನಾರಾಯಣನ ನಂಬು ನರಹರಿಯ kanaka dasaru nambu narayanana nambu narahariya

 

Restart mobile & try if the above audio is not playing


ಶ್ರೀಕನಕದಾಸರ ಕೃತಿ
ರಾಗ : ಮಲಯಮಾರುತ    ಆದಿತಾಳ

ನಂಬು ನಾರಾಯಣನ ನಂಬು ನರಹರಿಯ 
ನಂಬಿದಾ ಭಕ್ತರ ಕುಟುಂಬ ಸಾರಥಿಯ   ॥ಪ॥

ಬಲಿ ನಂಬಿ ಪಾತಾಳಲೋಕಕರಸಾದ
ಅದೆಕುಲದ ಪ್ರಹ್ಲಾದನು ನಿಜವ ಕಂಡ 
ಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದ
ಛಲದ ಪಾರ್ಥನು ನಂಬಿ ವಿಶ್ವರೂಪವ ಕಂಡ||1||

ಅಂಬರೀಷನು ನಂಬಿ ವೈಕುಂಠವೇರಿದನು|
ಹಂಬಲಿಸಿ ಶಶಿಧರನು ಉರಿಯ ಗೆದ್ದ||
ಕುಂಭಿನೀದೇವಿ ತಾ ಬಂಧನವ ಕಳೆದಳು||
ಅಂಬುಜಾಕ್ಷಿ ದ್ರೌಪದಿಯು ಮಾನ ಉಳುಹಿಕೊಂಡಳು|| 2||

ಅತಿ ಭಕುತರಿಗೆ ಮೆಚ್ಚಿ ಗತಿಮೋಕ್ಷವನಿತ್ತನು|
ಮತಿಭ್ರಷ್ಟ ಅಜಮಿಳನ ಉದ್ಧರಿಸಿದನು|| 
ಕ್ಷಿತಿಯೊಳಗೆ ಕಾಗಿನೆಲೆ ಆದಿಕೇಶವರಾಯ|
ಪತಿತ ಪಾವನ ಪರಮಪುರುಷೋತ್ತಮನನು||3|| 
**

Comments